Posts

Showing posts with the label ಕಥಾಗುಚ್ಛ

ಕಥಾಗುಚ್ಛ - ನಿರ್ಣಯ

Image
ಬೀರಮ್ಮ ಹೊತ್ತಾರೆ ಎದ್ದು ಎಲ್ಲಾ ಕೆಲಸ ಮುಗಿಸಿ ಕೂಲಿಗೆ ಹೊರಟಳು . ನಿಂಗವ್ವ ಇನ್ನೂ ಹಟ್ಟಿಯ ಬಾಗಿಲನ್ನೇ ತೆರೆಯದಿರುವುದನ್ನು ಕಂಡು ಇವಳಿಗೇನಾಯಿತೆಂದು “ ನಿಂಗಿ , ನಿಂಗಿ ” ಎಂದು ಬಾಗಿಲನ್ನು ಕುಟ್ಟಿದಳು . ಒಳಗೆ ಕೆಟ್ಟ ಕನಸಿನಿಂದ ನರಳುತ್ತಿದ್ದ ನಿಂಗವ್ವ ದಢಾರನೆ ಎದ್ದು ಕುಳಿತಳು . ವಾಸ್ತವಕ್ಕೆ ಬಂದ ತಕ್ಷಣ ‘ ಇಷ್ಟೊತ್ತು ಕಂಡಿದ್ದು ಕನಸಾ ? ’ ಎಂದು ಸಮಾಧಾನಗೊಂಡಳು . ಎದ್ದು ಬಾಗಿಲನ್ನು ತೆರೆದಳು . “ ಯಾಕಮ್ಮಿ ಇನ್ನು ಬೆಳಗಾಗಿಲ್ವೆ ನಿಂಗೆ , ಇವತ್ತು ದೊಡ್ಡಮನೆಯವರ ಕಳ್ಳೆಕಾಯಿ ಬಿಡಿಸಕ್ಕೆ ಹೋಗ್ಬೇಕು . ಮರೆತು ಹೋಯ್ತಾ ? ” ಎಂದು ರಾಗ ತೆಗೆದಳು ಬೀರಮ್ಮ . “ ಇಲ್ಲ ಬೀರಮ್ಮ , ಯಾಕೋ ಚೆನ್ನಿ ಶ್ಯಾನೆ ಕನ್ಸಲ್ಲಿ ಬರ್ತಾವ್ಳೆ . ಪೇಟೇಲಿ ಕೂಸು ಏನ್ ಪಾಡು ಪಡ್ತಾವ್ಳೋ ಏನೋ . ಹೋಗಿ ನೋಡ್ಕಂಡು ಬತ್ತೀನಿ ” ಕುಗ್ಗಿದ ದನಿಯಲ್ಲಿ ಹೇಳಿದಳು ನಿಂಗವ್ವ . “ ಏನಾರ ಹೇಳೆ , ನೀ ಬಲು ಕಟುಕಿ , ಇರಾ ಒಂದು ಮಗೀನಾ ಪ್ಯಾಟೀಗ್ ಕಳ್ಸಿ ಅದೇನ್ ಜೀವ್ನ ಮಾಡ್ತಿದ್ದೀ ” ಎಂದು ಕಟಕಿಯಾಡಿ ಹೊರಟುಹೋದಳು . ಬೀರಮ್ಮನ ಮಾತು ನಿಂಗಿಗೆ ನೇರ ಎದೆಗೆ ಚುಚ್ಚಿದಂತಾಯಿತು . ಅವಳ ಕಣ್ಣಲ್ಲಿ ನೀರು ತನ್ನಂತಾನೇ ಚಿಮ್ಮಿತು . ಅಲ್ಲೇ ಬಾಗಿಲ ಬಳಿ ಕುಸಿದು ಕುಳಿತಳು . ನಿಂಗವ್ವನ ಗಂಡ ತೀರಿಕೊಂಡು ಒಂದು ವರ್ಷವಾಗಿತ್ತು . 10 ವರ್ಷದ ...

ಕಥಾಗುಚ್ಛ - ಚೆನ್ನಮ್ಮನ ನಿಯತ್ತು

ಚೆನ್ನಮ್ಮ ನಿಯತ್ತಿನ ಹೆಂಗಸು . ಬಂಗಾರದ ಕೆಲಸ ಮಾಡುವ ಸತ್ಯಮ್ಮನ ಮನೆಯಲ್ಲಿ ದಿನಾ ಪಾತ್ರೆ ಉಜ್ಜಿ , ನೆಲ ಒರೆಸಿ , ಬಟ್ಟೆ , ನೀರು , ಕಸ – ಒಂದಲ್ಲ , ಎರಡಲ್ಲ . ಅಂಗಡಿಗೆ ಹೋಗಿ ಬರೋದ್ರಿಂದ ಹಿಡಿದು ಅಟ್ಟದ ಧೂಳು ಹೊಡೆಯುವ ಎಲ್ಲಾ ಕೆಲಸಗಳನ್ನೂ ಚೆನ್ನಮ್ಮನೇ ಮಾಡುತ್ತಿದ್ದಳು .  8 ಮಕ್ಕಳ ತಾಯಿಯಾದ ಅವಳು , ಅದರಲ್ಲಿ 4 ಮಕ್ಕಳ ಸಾವನ್ನು ಕಣ್ಣಾರೆ ನೋಡಿದ್ದ ನತದೃಷ್ಟೆ ಕೂಡ . ಯಾರ ಪ್ರೀತಿಯನ್ನೂ ಪಡೆದುಕೊಂಡು ಬಂದಿಲ್ಲದ ಅವಳಿಗೆ ಕುಡುಕ ಗಂಡನ ಹಿಂಸೆಯೂ ದಿನಚರಿಯಂತೆ ನಡೆಯುತ್ತಿತ್ತು . ಮೊದಲು ಒಂದು ಹೊತ್ತು ಊಟಕ್ಕೂ ಹೆಣಗಾಡುತ್ತಿದ್ದ ಚೆನ್ನಮ್ಮನಿಗೆ ಸತ್ಯಮ್ಮನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ , ಅವಳ ಹಸಿವಿನ ಬಾಧೆ ತೀರಿತು . ಮಕ್ಕಳು ಎರಡೊತ್ತು ತಿಂದು ಚೆನ್ನಗಾದವು . ಸತ್ಯಮ್ಮ ನೀಡುತ್ತಿದ್ದ ಹಳೆಯ ಬಟ್ಟೆಗಳು ಮಕ್ಕಳ ಮತ್ತು ಚೆನ್ನಮ್ಮನ ಮೈಮುಚ್ಚಿದವು . ಇದರಿಂದ ಚೆನ್ನಮ್ಮನ ನಿಷ್ಠೆ , ಶ್ರಮ ಸತ್ಯಮ್ಮನಿಗಾಗಿ ಇಮ್ಮಡಿಸಿತು .  ಸತ್ಯಮ್ಮನೆ ಬರುಬರುತ್ತಾ ಚೆನ್ನಮ್ಮನ ಪ್ರಾಮಾಣಿಕತೆಗೆ ಬೆರಗಾಗಿ ಮನೆಯ ಜವಾಬ್ದಾರಿಯನ್ನು ಪೂರ್ಣವಾಗಿ ಕೊಟ್ಟುಬಿಟ್ಟು ದೇವರ ಮನೆಯಲ್ಲಿ ಪೂಜೆ , ಧ್ಯಾನವೆಂದು ಕೂರುತ್ತಿದ್ದಳು . ಒಮ್ಮೊಮ್ಮೆ ಎಲ್ಲಾ ಚೆನ್ನಮ್ಮನಿಗೆ ಬಿಟ್ಟು ತವರಿಗೆ ವಾರಗಟ್ಟಲೆ ಹೊರಟುಬಿಡುತ್ತಿದ್ದಳು . ವಂಚ...