ಸಿನಿನೋಟ - ಮುನ್ನುಡಿ
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಂಡಾಯ ಸಾಹಿತ್ಯವನ್ನಾಧರಿಸಿ ನಿರ್ಮಿಸಿದ ಅತ್ಯುತ್ತಮವಾದ ಚಲನಚಿತ್ರಗಳಲ್ಲಿ “ ಮುನ್ನುಡಿ ” ಎಂಬ ಚಲನಚಿತ್ರವೂ ಒಂದು . ಈ ಸಿನಿಮಾಗೆ ರಾಜ್ಯ ಪ್ರಶಸ್ತಿ ಬಂದಿದೆ . ಈ ಸಿನಿಮಾದಲ್ಲಿನ ರುಖಿಯಾಳ ಪಾತ್ರಕ್ಕಾಗಿ ‘ ತಾರ ' ರವರಿಗೆ ‘ ಅತ್ಯುತ್ತಮ ನಟಿ ’ ಎಂದು ರಾಷ್ಟ್ರ ಪ್ರಶಸ್ತಿ ದೊರೆಯಿತು . ಈ ಸಿನಿಮಾದ ನಿರ್ದೇಶಕರು ಪಿ . ಶೇಷಾದ್ರಿ . ಈ ಸಿನಿಮಾ ಕೇರಳದ ಮುತ್ತುಛೇರ ಎಂಬ ಕುಗ್ರಾಮದಲ್ಲಿ ಶೋಷಣೆಗೊಳಗಾದ ಹೆಣ್ಣುಮಕ್ಕಳ ನಿಜಜೀವನದ ಕಥೆಯನ್ನಾಧರಿಸಿದೆ . ಮುಸ್ಲಿಮರೇ ಪ್ರಮುಖರಾಗಿರುವ ಆ ಹಳ್ಳಿಯಲ್ಲಿ ಬಡತನ , ನಿರುದ್ಯೋಗ ತಾಂಡವವಾಡುತ್ತಿರುತ್ತದೆ . ಇಲ್ಲಿ ಒಬ್ಬ ಸಾಹುಕಾರ ಟಿಂಬರ್ ವ್ಯಾಪಾರಿಯಾಗಿದ್ದು ತನ್ನ ಮರದ ದಿಮ್ಮಿಗಳನ್ನು ಅರಬ್ಬೀ ದೇಶಕ್ಕೆ ಸಮುದ್ರದ ಮೂಲಕ ಸಾಗಿಸುತ್ತಾ ಇರುತ್ತಾನೆ . ಅರಬ್ಬಿಯಿಂದ ಬರುವ ವ್ಯಾಪಾರಿಗಳನ್ನು ಆಕರ್ಷಿಸಲು ಆ ಹಳ್ಳಿಯ ಬಡ ಹೆಣ್ಣುಮಕ್ಕಳನ್ನು ಜೀವನವನ್ನೇ ಪಣಕ್ಕಿಡುತ್ತಿರುತ್ತಾನೆ . ವ್ಯಾಪಾರಕ್ಕೆಂದು ಬೇರೆಡೆ ಹೋಗುವ ಮುಸ್ಲಿಮರು ತಾತ್ಕಾಲಿಕ ವಿವಾಹವನ್ನು ಮಾಡಿಕೊಳ್ಳುವ ಪದ್ಧತಿಯನ್ನು , ಅದರಿಂದ ಶೋಷಣೆಗೊಳಗಾಗುವ ಹೆಣ್ಣುಮಕ್ಕಳ ಚಿತ್ರಣವನ್ನು , ಅಂತಿಮವಾಗಿ ಆ ಹೆಣ್ಣುಮಕ್ಕಳೇ ಈ ಪದ್ಧತಿಯ ವಿರುದ್ಧ ಸಿಡಿದೇಳುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗ...