Posts

Showing posts with the label ಪುಸ್ತಕ ನೋಟ

ಪುಸ್ತಕ ನೋಟ - ಹಗಲುಗನಸು

Image
( ಗುಜರಾತ್ ನಲ್ಲಿ ಶಿಕ್ಶಣತಜ್ಞರಾದ ಗಿಜುಭಯ್ ಬಧೇಕಾರವರು ನಡೆಸಿದ ಸ್ವಂತ ಪ್ರಯೋಗದ ಆಧಾರದ ಮೇಲೆ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ )   ಒಬ್ಬ ಉತ್ಸಾಹಿ ಯುವ ಶಿಕ್ಷಣತಜ್ಞ ತಾನು ಅರಿತ ಸತ್ಯಾಂಶಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ದೃಢೀಕರಿಸಲು ನಾಲ್ಕನೇ ತರಗತಿಯ ಶಿಕ್ಷಕರಾಗಿ , ಒಂದು ಶಾಲೆಗೆ ಬರುತ್ತಾರೆ . ಬಲು ಆತ್ಮವಿಶ್ವಾಸದಿಂದ ಮೊದಲ ದಿನವೇ ಮಕ್ಕಳನ್ನು ತನ್ನ ಕೌಶಲ್ಯದಿಂದ ಮೋಡಿಗೊಳಿಸುತ್ತೇನೆ ಎಂದುಕೊಂಡು ತರಗತಿ ಪ್ರವೇಶಿಸುತ್ತಾರೆ . ಅಲ್ಲಿ ಕುಳಿತಿದ್ದ ಮಕ್ಕಳ ತುಂಟ ವರ್ತನೆ ಕಂಡು ಅವರ ಜಂಘಾಬಲವೇ ಉಡುಗಿಹೋಗುತ್ತದೆ . ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು , ‘ ಈಗ ಶಾಂತಿಯ ಆಟ ಆಡೋಣವೆಂದು , ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ , ಕತ್ತಲೆ ಮಾಡಿ , ‘ ಓಂ ಶಾಂತಿ ’ ಎಂದು ಹೇಳಿಕೊಡುತ್ತಾರೆ . ಮಕ್ಕಳೆಲ್ಲಾ ಕತ್ತಲಲ್ಲಿ ‘ ಹಾಂ , ಹೂ , ಓಂ ಎನ್ನುತ್ತಾ ಗದ್ದಲ ಮಾಡಿ ಜೋರಾಗಿ ಚಪ್ಪಾಳೆ ತಟ್ಟಿ ನಕ್ಕುಬಿಡುತ್ತಾರೆ . ಬೇಸತ್ತ ಯುವಕ ಮಕ್ಕಳಿಂದ ಮುಕ್ತಿ ಪಡೆಯಲು ರಜೆ ಘೋಷಿಸಿಬಿಡುತ್ತಾರೆ . ಅಂದು ತನಗಾದ ಅವಮಾನದಿಂದ ದಿನವೆಲ್ಲಾ ಅಶಾಂತಿಯಿಂದಲೇ ಕಳೆಯುತ್ತಾರೆ .  ಇದೇ ಯುವಕ ಮುಂದೆ ಒಂದು ವರುಷದೊಳಗೆ , ಆ ಮಕ್ಕಳನ್ನೇ ತನ್ನ ಸಹನೆ ಮತ್ತು ಪ್ರೀತಿಯಿಂದ ತನ್ನೆಡೆಗೆ ಸೆಳೆದುಕೊಂಡು , ಅವ...

ಪುಸ್ತಕ ನೋಟ - ಟೊಳ್ಳು ಗಟ್ಟಿ

Image
ಹಿರಿಯಣ್ಣಯ್ಯನಿಗೆ ಇಬ್ಬರು ಪುತ್ರರು - ಪುಟ್ಟು , ಮಾಧು . ಪತ್ನಿ ಭಾಗಿರಥಮ್ಮ , ಹಿರಿ ಸೊಸೆ ಪಾತು ಕಿರಿ ಸೊಸೆ ಸಾತು , ಸೋದರಿ ನಾಗಮ್ಮ ( ವಿಧವೆ ) ... ಇಷ್ಟು ಮಂದಿ ಆ ಮನೆಯ ಸದಸ್ಯರು . ಪುಟ್ಟು ಓದಿನಲ್ಲಿ ಯಾವಾಗ್ಲೂ ಫಸ್ಟ್   .... ಪುಸ್ತಕದ ಹುಳೂನೆ ಅವ . ಅದು ಬಿಟ್ಟರೆ ಲೋಕದಲ್ಲಿ ಎಲ್ಲವೂ ವ್ಯರ್ಥವೆಂಬ ಭಾವನೆ ಅವನದು . ಖಾಯಿಲೆಯ ತಾಯಿಯನ್ನೂ ಲೆಕ್ಕಿಸದವ .     ಮಾಧು .... ಬಡಪಾಯಿ ... ಓದಿನಲ್ಲಿ ಹಿಂದೆ ಗುಣದಲ್ಲಿ ಮುಂದೆ . ತನ್ನ ಆಟ ಪಾಠಗಳನ್ನು ಮರೆತು ತಾಯಿಗೆ ಔಷಧಿ ,  ಸಣ್ಣ ಪಾಪಗೆ   ಹಾಲು ತರುವಲ್ಲಿ ಅವರ ಆರೈಕೆ ಮಾಡೋದರಲ್ಲೆ ಅವನು ಮಗ್ನನಾಗಿರುತ್ತಾನೆ .   ಹಿರಿಯಣ್ಣಯ್ಯನಿಗೆ ಪುಟ್ಟುವೇ ಒಂದು ಕೋಡಿದ್ದಂತೆ , ಮನೆಯ ಕೀರ್ತಿಪುತ್ರರತ್ನನೆಂದು ಅವನಿಗೆ ಹೆಚ್ಚೇ ಸಮ್ಮಾನ ಸೌಕರ್ಯಗಳನ್ನು ಮಾಡುತ್ತಿರುತ್ತಾನೆ . ಮಾಧು ಒಂದು ದಂಡಪಿಂಡ ಪಾಸಾಗದವನೆಂದು ಅವನಿಗೆ ಊಟದಲ್ಲೂ ಕೊರತೆ ಮಾಡಿ ಮಲಗಲು ಹೊದಿಕೆಯೂ ನೀಡದೆ ಶಿಕ್ಷಿಸುತ್ತಿರುತ್ತಾನೆ .       ಒಂದಿನ ರಾತ್ರಿ ಮಲಗಿರೋವಾಗ ಮನೆಗೆ   ಬೆಂಕಿ ಹತ್ತುದ ಕಂಡು ಪುಟ್ಟು ತನ್ನ ಪಾಡಿಗೆ ತಾ ಎದ್ದು ಹೊರ ಓಡುತ್ತಾನೆ . ಆದರೆ ಮಾಧು ತನ್ನ ತಾಯಿಯನ್ನ ಹಸುಳೆ ಕಂದನ್ನ ಒಳ ಮಲಗಿದ್ದ ಅಪ್ಪನನ್ನ ಎಬ್ಬಿಸಿ ...