ಮೇರು ವ್ಯಕ್ತಿತ್ವ - ಮಹಾತ್ಮ ಜ್ಯೋತಿಭಾ ಫುಲೆ
ಭಾರತೀಯ ಹಿಂದೂ ಪಾರಂಪರಿಕ ಧರ್ಮ ಇಂದೂ ಸಹ ಹೆಣ್ಣು ಗಂಡು ಎಂಬ ತಾರತಮ್ಯ ಹೊಂದಿರುವುದು ಎಲ್ಲರಿಗೂ ತಿಳಿದ ವಿಷಯವೇ . ಪರಿಸ್ಥಿತಿ 21 ನೇ ಶತಮಾನದಲ್ಲೂ ಹೀಗಿರುವಾಗ 19 ನೇ ಶತಮಾನದಲ್ಲಿ ಹೆಣ್ಣಿನ ಬಗ್ಗೆ ಸಮಾಜದ ಭಾವನೆ ಏನಿತ್ತು ಎಂಬುದನ್ನು ತಿಳಿಯುವುದೇನೂ ಕಷ್ಟವಲ್ಲ . ಸಮಾಜದಲ್ಲಿ ಪುರುಷರಿಗೆ ಹೆಚ್ಚು ಒತ್ತುಕೊಡಲಾಗಿತ್ತು . ಇದಕ್ಕೆ ಒತ್ತಾಸೆಯಾಗಿ ಪುರಾತನ ಧರ್ಮಗ್ರಂಥಗಳೂ ಅದನ್ನೇ ಸಾರಿ ಹೇಳುತ್ತಿದ್ದವು . ಸಮಾಜದಲ್ಲಿ ಲಿಂಗಭೇದ ಜಾತಿಬೇದ . ಹೀಗೆ ಹತ್ತಾರು ಸಾಮಾಜಿಕ ಜಾಡ್ಯಗಳಿಂದ ತುಂಬಿಹೋಗಿತ್ತು . ಇದಕ್ಕೆ ಅಂತ್ಯ ಹಾಡಿ ಕ್ರಾಂತಿ ಮಾಡುವ ವ್ಯಕ್ತಿಗಳು ಆ ನಿಟ್ಟಿನಲ್ಲಿ ತಮ್ಮದೇ ಕ್ರಾಂತಿಕಾರಿ ಮನೋಧರ್ಮದಿಂದ ಸಮಾಜದ ಅನಿಷ್ಟ ಪದ್ಧತಿಗಳಿಗೆ ಪೂರ್ಣ ವಿರಾಮವನ್ನಿಟ್ಟು , ಹೆಣ್ಣುಮಕ್ಕಳ ಸಮಾನತೆ , ಶಿಕ್ಷಣಕ್ಕಾಗಿ ಹೋರಾಡಿದರು . ಅವರಲ್ಲಿ ಮಹಾತ್ಮ ಜ್ಯೋತಿಭಾ ಫುಲೆಯವರು ಮುಂಚೂಣಿಯಲ್ಲಿದ್ದಾರೆ . ಅವರು ಚಿಂತಕರು , ಸಮಾಜ ಸುಧಾರಕರು , ಕ್ರಿಯಾಶೀಲರು ಮತ್ತು ಕ್ರಾಂತಿಕಾರಿಗಳಾಗಿದ್ದರು . ಅವರ ಹೋರಾಟ ಎಲ್ಲಾ ಕ್ಷೇತ್ರಗಳಲ್ಲೂ ಹರಡಿತ್ತು , ಮುಖ್ಯವಾಗಿ ಶಿಕ್ಷಣ , ಕೃಷಿ , ಜಾತಿ ವ್ಯವಸ್ಥೆಯ ನಾಶ , ಸ್ತ್ರೀ ಮತ್ತು ವಿಧವೆಯರ ಏಳಿಗೆ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆ . ತಾವೂ ಕೂಡ ಶೂದ್ರ ಮನೆತನದಲ್ಲಿ ಹುಟ್ಟಿ ಮೇಲ್ವರ್ಗದ...