Posts

ಕವನ - ನಿರ್ಭಯಾ

Image
         ನಿರ್ಭಯಾ ಘಟನೆಗೆ ತಲ್ಲಣಿಸಿದ ಮನ ರಾತ್ರಿಯೆಲ್ಲ ನಿದ್ದೆ ದೂರಾಗಿ ಒದ್ದಾಡುತಿರುವಾಗ ಆ ತುಮುಲಗಳನ್ನೆಲ್ಲ ಹೊರಹಾಕಿದ ಪ್ರಯತ್ನವೇ ಈ ಕವನ , ನೊಂದ ಹೆಣ್ಣುಮಕ್ಕಳ ಆತ್ಮಗಳಿಗೆ ಅಂಕಿತ ಈ ಪದ್ಯ , ಹೋರಾಡುವ ಮನಗಳಿಗೆ ಅರ್ಪಣೆ ಈ ಕವನ ... ದಾರುಣವದು ದುರ್ದಿನದಲಿ   ದಾಂಡಿಗರ ದಾಂಧಲೆಯಲಿ   ಧ್ವಂಸಳಾದೆ ದಯೆತೋರದ   ದುಷ್ಟ ಜನರ ಧರೆಯಲಿ   ನೆತ್ತರಿನ ಮಡುವಿನಲಿ   ನೆಂದು ಹೋದರೂ ನೀನು   ನಂದಲಿಲ್ಲ ನಂಬಿಕಾಗ್ನಿ   ನರಳುತಿದ್ದರೂನು   ದೇಶವಿಡೀ ಕಂಪಿಸಿ   ದುರಂತಕಾಗಿ ದುಃಖಿಸಿ   ದಾಮಿನಿಯರ ದುರ್ಗತಿಯ   ದಾರಿಯನ್ನು ಅಳಿಸಿ ಎಂದು   ಬದುಕ ಬಯಸಿದೆ ನೀನು   ಛಲದಿ ಸಹಿಸಿದೆ   ಇಂದು ನಾಳೆ ಎಂದಾದರೂ   ಗೆಲುವೆ ಎಂದೆಣಿಸಿದೆ   ಆ ದುರುಳರ ದಮನವಿನ್ನು   ದೂರದಲ್ಲಿ ಇಲ್ಲವೆಂದು   ಧೂರ್ತರಿಗೆ ದಂಡವಂತು   ದೊರಕದಿರುವುದಿಲ್ಲವೆಂದು   ದಿನವು ದೂಡಿದೆ ನೀನು   ದಾರಿ ನೋಡಿದೆ   ಮತ್ತೇಕೆ ಮೌನವಾದೆ   ನಮ್ಮನೇಕೆ ದೂಡಿ ಹೋದೆ   ಓ ಗೆಳತಿ ಈ ಅಂತ್ಯವು   ಮುಗಿದಾ ಕಥೆಯಲ್ಲ   ಮೌನ ವಹಿಸಿ ಸ...

ಹಾಸ್ಯಬರಹ - ಅಂಕಲ್ ನ ಸ್ಪೀಚು

Image
ರಾಜ್ಯಶಾಸ್ತ್ರ ವಿಭಾಗ ಎಂಬ ಪಿಚ್ಚು , ಅಲ್ಲಿ ಅಂಕಲ್ ನ ಸ್ಪೀಚು ನಿರಂತರ ಕೋಚು ನಾನ್ ಸ್ಟಾಪ್ ವಾಚು ಮಾತೆಂಬ ಬ್ಯಾಟಿಂಗ್ ನಿಂದ ಅದು ನುಚ್ಚು ವಿಷಯದಲ್ಲಿರಲಿಲ್ಲ ಒಂದಕ್ಕೊಂದು ಮ್ಯಾಚು ಆಫ್ ಆಯ್ತು ಮೈಂಡ್ ಸ್ವಿಚ್ ಹಿಡಿತ ತಪ್ಪಿತು ದೇಹದ ಕ್ಲಚ್ಚು ಕೊಠಡಿ ತಾಪವೂ ಹೆಚ್ಚು ಧಗೆಯಲ್ಲಿ ಹೊತ್ತಿಸಿದಂತಿತ್ತು ದೇಹಕ್ಕೆ ಕಿಚ್ಚು ಹತ್ತುತ್ತಿತ್ತು ನಿಧಾನವಾಗಿ ಹುಚ್ಚು ಹಸಿವಿನಿಂದ ಹಿಡಿಯಿತು ಹೊಟ್ಟೆ ಕಚ್ಚು ಅನಿಸಿತ್ತು ಯಾರನ್ನಾದರೂ ಹಿಡಿದು ಕೊಚ್ಚು ಅಂಕಲ್ ಹಾಕುತ್ತಿದ್ದದ್ದು ಬ್ಲೇಡಲ್ಲ ... ಮಚ್ಚು ಕೊನೆಗೂ ತಿಳಿಯಲಿಲ್ಲ ಅವರಿಗೆ ನಮ್ಮ ಪೇಚು ಎದ್ದು ಓಡಲು ಸಾಲಲಿಲ್ಲ ಕೆಚ್ಚು ನಮ್ಮ ಸ್ಥಿತಿ ದೇವರಿಗೇ ಮೆಚ್ಚು ಮನ ಹೇಳಿತು ಏನಾದರೊಂದು ಗೀಚು ಕೊನೆಗೂ ಮುಗಿಯಿತು ಅಂಕಲ್ ಸ್ಪೀಚು ಹರುಷದಿ ಬೆಂಚನ್ನು ಚಚ್ಚೊ ಚಚ್ಚು .....!!                                        - ರೂಪ ಮತ್ತು ಉಷಾಗಂಗೆ

ಪುಸ್ತಕ ನೋಟ - ಹಗಲುಗನಸು

Image
( ಗುಜರಾತ್ ನಲ್ಲಿ ಶಿಕ್ಶಣತಜ್ಞರಾದ ಗಿಜುಭಯ್ ಬಧೇಕಾರವರು ನಡೆಸಿದ ಸ್ವಂತ ಪ್ರಯೋಗದ ಆಧಾರದ ಮೇಲೆ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ )   ಒಬ್ಬ ಉತ್ಸಾಹಿ ಯುವ ಶಿಕ್ಷಣತಜ್ಞ ತಾನು ಅರಿತ ಸತ್ಯಾಂಶಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ದೃಢೀಕರಿಸಲು ನಾಲ್ಕನೇ ತರಗತಿಯ ಶಿಕ್ಷಕರಾಗಿ , ಒಂದು ಶಾಲೆಗೆ ಬರುತ್ತಾರೆ . ಬಲು ಆತ್ಮವಿಶ್ವಾಸದಿಂದ ಮೊದಲ ದಿನವೇ ಮಕ್ಕಳನ್ನು ತನ್ನ ಕೌಶಲ್ಯದಿಂದ ಮೋಡಿಗೊಳಿಸುತ್ತೇನೆ ಎಂದುಕೊಂಡು ತರಗತಿ ಪ್ರವೇಶಿಸುತ್ತಾರೆ . ಅಲ್ಲಿ ಕುಳಿತಿದ್ದ ಮಕ್ಕಳ ತುಂಟ ವರ್ತನೆ ಕಂಡು ಅವರ ಜಂಘಾಬಲವೇ ಉಡುಗಿಹೋಗುತ್ತದೆ . ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು , ‘ ಈಗ ಶಾಂತಿಯ ಆಟ ಆಡೋಣವೆಂದು , ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ , ಕತ್ತಲೆ ಮಾಡಿ , ‘ ಓಂ ಶಾಂತಿ ’ ಎಂದು ಹೇಳಿಕೊಡುತ್ತಾರೆ . ಮಕ್ಕಳೆಲ್ಲಾ ಕತ್ತಲಲ್ಲಿ ‘ ಹಾಂ , ಹೂ , ಓಂ ಎನ್ನುತ್ತಾ ಗದ್ದಲ ಮಾಡಿ ಜೋರಾಗಿ ಚಪ್ಪಾಳೆ ತಟ್ಟಿ ನಕ್ಕುಬಿಡುತ್ತಾರೆ . ಬೇಸತ್ತ ಯುವಕ ಮಕ್ಕಳಿಂದ ಮುಕ್ತಿ ಪಡೆಯಲು ರಜೆ ಘೋಷಿಸಿಬಿಡುತ್ತಾರೆ . ಅಂದು ತನಗಾದ ಅವಮಾನದಿಂದ ದಿನವೆಲ್ಲಾ ಅಶಾಂತಿಯಿಂದಲೇ ಕಳೆಯುತ್ತಾರೆ .  ಇದೇ ಯುವಕ ಮುಂದೆ ಒಂದು ವರುಷದೊಳಗೆ , ಆ ಮಕ್ಕಳನ್ನೇ ತನ್ನ ಸಹನೆ ಮತ್ತು ಪ್ರೀತಿಯಿಂದ ತನ್ನೆಡೆಗೆ ಸೆಳೆದುಕೊಂಡು , ಅವ...